ಪ್ರಪಂಚದ ಸುತ್ತ, ಅನುಭವದ ಸುತ್ತ
(ದುಬೈನಲ್ಲಿ ಶಿವರಾತ್ರಿಯ ಅನುಭವ )
********************************
ನನ್ನ ಹೆಸರು ಸರೋಜಾ ರಾವ್.ಬೆಂಗಳೂರಿನಲ್ಲಿ ಕಾವೇರಿ ರೋಡಿನಲ್ಲಿ ನಮ್ಮ ಮನೆ ಇದೆ. ಹೆಸರು "ರಾಮ ರಕ್ಷ "
ನಮ್ಮ ಮನೆಯ ಬಳಿಯಲ್ಲೇ ಮಂಜು
ನಾಥೇಶ್ವರ ದೇವಸ್ಥಾನ, ಆಂಜನೇ ಯ
ದೇವಸ್ಥಾನಗಳು ಇವೆಯಾವ ಹಬ್ಬಗಳು ಬಂದರೂ, ಆಯಾ ದೇವರುಗಳನ್ನು ಇಲ್ಲಿಯ ದೇವಸ್ಥಾನಗಳಲ್ಲಿಯೇ ನೋಡ ಬಹುದು. ಈಗ ಶಿವರಾತ್ರಿ ಹಬ್ಬ ಬಂದಿದೆ. ದುಬೈನಲ್ಲಿದ್ದೇನೆ. ಏನು ಮಾಡುವುದು
ಶಿವನನ್ನು ಎಲ್ಲಿ ದರ್ಶನ ಮಾಡುವುದು ಎಂದುಕೊಳ್ಳುತ್ತಿದ್ದೆ. ಹಬ್ಬದ ಬೆಳಗಿನ
ಜಾವ ನಾಲಕ್ಕು ಗಂಟೆಗೆ ಸೊಸೆ, ರವಿ
ಮತ್ತು ಅಗ್ನಿಯನ್ನು ಎಬ್ಬಿಸುತ್ತಿದ್ದಳು.
ದುಬೈನ ವೇದ ಬಳಗ ಸತ್ಸಂಗ ದವರು ಮಹಾ ರುದ್ರ ಮಹಾ ಯಜ್ಞಂ ಎಂಬ
ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. 11 ಜನ ಋತ್ವಿಕರು, 11 ಗುಂಪುಗಳಲ್ಲೀ ಏಕಕಂಠದಲ್ಲಿ 11 ಬಾರಿ ಪಠಿಸಿದರು
ರುದ್ರ ಮತ್ತು ಚಮೆಯನ್ನು. ನೋಡಲು
ಕೇಳಲು ಕರ್ಣಾನಂದ ಕರವಾಗಿತ್ತು.
ಈ ಅಭೂತ ಪೂರ್ವ ದೃಶ್ಯ ನೋಡಲು
ಪೂರ್ವ ಜನ್ಮದ ಸುಕೃತಿ ಇದ್ದರೆ ಮಾತ್ರ ಸಾಧ್ಯ ಎಂದೆನ್ನಿಸಿತು. ಮನಸ್ಸು ಆನಂದ ಪರವಶವಾಗಿತ್ತು.
ನಾನು ನನ್ನ ಇಬ್ಬರು ಮಕ್ಕಳು ರಾಮು ರವಿ, ಮೊಮ್ಮಕ್ಕಳಾದ ಭಾರ್ಗವ
ಅಗ್ನಿ, ಅಭಿಜ್ಞಾ ಮತ್ತು ಧ್ವನಿ ಮತ್ತು ಸೊಸೆಯರಾದ ಶಾರದ ಅಕ್ಷತಾ ಎಲ್ಲರೂ ವೇದ ಗುರುಗಳಾದ ಶ್ರೀಯುತ ಮುರುಳಿ ಶರ್ಮರ ಶಿಷ್ಯರು ಎಂದು
ಹೇಳಿಕೊಳ್ಳಲು ಅತ್ಯಂತ ಹೆಮ್ಮೆಯಾಗುತ್ತಿದೆ. ಅವರ ನಿಸ್ವಾರ್ಥ ಪರಿಶ್ರಮದಫಲವಾಗಿ ಅವರ ನೇತೃತ್ವದಲ್ಲಿ ಸಹಸ್ರ
ಸಹಸ್ರ ಶಿಷ್ಯರುಗಳು ತಯಾರಾಗುತ್ತಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿದೊಡ್ಡದು ಎಂಬಂತೆ ಪುಟ್ಟ ಪುಟ್ಟ ಮಕ್ಕಳು ವೇದದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಹೇಳಲು ಅತ್ಯಂತ ಸಂತೋಷವಾಗತ್ತದೆ ಇಲ್ಲಿದುಬೈನಲ್ಲಿ ನಡೆದ ಸಮಾರಂಭದಲ್ಲಿ
ಅತ್ಯಂತ ಕಿರಿಯ ಬಾಲಕ, ಶ್ರೀಯುತ ಮುರಳಿಯವರ ಪ್ರಿಯಶಿಷ್ಯ ಚಿರಂಜೀವಿ ಅಗ್ನಿ ಹಿರಿಸಾವೇ ಎಲ್ಲರಮುದ್ದಿನ ಕೇಂದ್ರ ಬಿಂದು ಆಗಿದ್ದ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆಭಕ್ತಿಯಿಂದ ಕರೆದರೆ ಶಿವಓ ಗೊಡನೆ ಎಂಬಂತೆ ನಮಗೆ ಇಲ್ಲಿಯೇ
ಶಿವ ದರ್ಶನ ಅದ್ಭುತವಾಗಿ ಆಯ್ತುಅ
ಭಿಷೇಕ,ಪೂಜೆ ಜನಗಳ ಭಕ್ತಿ ಭಾವ ನೋಡುತ್ತಿದ್ದರೆ ಕೈಲಾಸವೇ ಧರೆಗಿಳಿದು ಬಂದಿತ್ತೇನೋ ಎಂಬ ಭಾವ. ಆ ಪೂಜೆ
ಅಲಂಕಾರ, ಅನ್ನಸಂತರ್ಪಣೆ ಜನರ ಸೌಹಾರ್ದ ಎಲ್ಲವೂ ಮರೆಯಲಾರದ ನೆನಪುಗಳು. ಪುನೀತರಾದ ಭಾವನೆ.
ಈ ಲೇಖನದೊಡನೆ ಕೆಲವು ಭಾವ
ಚಿತ್ರಗಳನ್ನು ಎಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದೇನೆ.
ರಚನೆ
ಸರೋಜಾ ರಾವ್